Google News-KN | Google News-EN | Telegram |
7 ಕೋಟಿ ರೂ. ವಿಮೆ ಹಣ ಪಡೆಯಲು ಮತ್ತೊಬ್ಬನನ್ನು ಕೊಂದು ತಾನು ಸತ್ತಿರುವುದಾಗಿ ಬಿಂಬಿಸಿದ ತೆಲಂಗಾಣದ ಸರಕಾರಿ ಉದ್ಯೋಗಿ ಸಿಕ್ಕಿಬಿದ್ದಿದ್ದಾನೆ.
ಮೆಡೆಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸರಕಾರಿ ಉದ್ಯೋಗಿ, ಪತ್ನಿ ಹಾಗೂ ಇಬ್ಬರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ನಲ್ಲಿ ತೆಲಂಗಾಣ ಸೆಕ್ರೆಟರಿ ವಿಭಾಗದಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಷೇರು ಮಾರುಕಟ್ಟೆಯಲ್ಲಿ 85 ಲಕ್ಷ ರೂ. ನಷ್ಟ ಮಾಡಿಕೊಂಡಿದ್ದ.
ಸಾಲದಿಂದ ಹೊರಬರಲು ಯೋಜನೆ ರೂಪಿಸಿದ ಈತ, ಪತ್ನಿ ಹಾಗೂ ಸಂಬಂಧಿಕರ ನೆರವು ಕೇಳಿದ. 7.4 ಕೋಟಿ ರೂ. ಮೌಲ್ಯದ 25 ವಿಮೆಗಳನ್ನು ಮಾಡಿಸಿದ.
ವಿಮೆ ಹಣ ಪಡೆಯಲು ತನ್ನಂತೆ ಹೋಲುವ ವ್ಯಕ್ತಿಯನ್ನು ಕೊಂದ ಈತ ತನ್ನ ಐಡಿ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಆತನ ಬಳಿ ಇರಿಸಿ ತನ್ನದೇ ಕೊಲೆ ಆಗಿದೆ ಎಂದು ಬಿಂಬಿಸಿದ. ಆದರೆ ತನಿಖೆ ವೇಳೆ ಪೊಲೀಸರಿಗೆ ಅನುಮಾನ ಬಂದಿದ್ದು, ಸತ್ತ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜನವರಿ 8ರಂದು ರೈಲ್ವೆ ನಿಲ್ದಾಣದ ಬಳಿ ತನ್ನಂತೆ ಹೋಲುವ ಸುಮಾರು 44 ವರ್ಷದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡ. ಆತನಂತೆ ತಲೆ ಕೂದಲು ಬೋಳಿಸಿಕೊಂಡ. ತನ್ನ ಬಟ್ಟೆಗಳನ್ನು ನೀಡಿ ಅಧಿಕಾರಿಯಂತೆ ಕಾಣುವಂತೆ ಮಾಡಿ ವೆಂಕಟಾಪುರಂ ಗ್ರಾಮಕ್ಕೆ ಕರೆದೊಯ್ದ.
ನಂತರ ಕಾರಿನ ಮೇಲೆ ಪೆಟ್ರೋಲ್ ಸುರಿದು ಒಳಗೆ ಡ್ರೈವರ್ ಸೀಟಿನಲ್ಲಿ ಕೂರುವಂತೆ ಸೂಚಿಸಿದ್ದಾನೆ. ಆದರೆ ಆ ವ್ಯಕ್ತಿ ಕುಳಿತುಕೊಳ್ಳಲು ನಿರಾಕರಿಸಿದಾಗ ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿ ಕಾರಿನ ಮುಂದಿನ ಸೀಟಿನಲ್ಲಿ ಕೂರಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಇದೀಗ 7 ಕೋಟಿ ಆಸೆಗೆ ಕೊಲೆ ಮಾಡಿದ ದಂಪತಿ ಹಾಗೂ ಸಂಬಂಧಿಕರು ಕಂಬಿ ಎಣಿಸುತ್ತಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.