Google News-KN | Google News-EN | Telegram |
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಅಂತಿಮ ಪರೀಕ್ಷೆಗಳು ಆರಂಭವಾಗಿದೆ. ಮೊದಲ ದಿನವೇ ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ವಿದ್ಯಾರ್ಥಿನಿಯೋರ್ವಳ ಮೂರು ಹಾಲ್ ಟಿಕೆಟ್ಗಳು ಸುಟ್ಟು ಅಥವಾ ಹರಿದು ಹೋದ ಘಟನೆ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ.
ಘಟನೆಯಿಂದ ವಿದ್ಯಾರ್ಥಿನಿ ಗೊಂದಲಕ್ಕೊಳಗಾಗಿದ್ದು, ಮೇಲ್ವಿಚಾರಕರು ಆಶ್ಚರ್ಯ ಹಾಗೂ ಸಂಶಯಕ್ಕೊಳಗಾಗಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿನಿ ಭವಿಷ್ಯದ ಮೇಲೆ ವಾಮಾಚಾರ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.
ಪವಿತ್ರಾ ಪುಂಡಲೀಕ ಗುಡ್ಡರ್ (18) ವರ್ಷದ ಹಿಂದೆ ತಂದೆ ತಾಯಿಯನ್ನು ಕಳೆದುಕೊಂಡಿದ್ದು, ಗೊಳಸಂಗಿಯ ಬಿ ಎಸ್ ಪವಾರ್ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.
ಪವಿತ್ರಾಗೆ ಮುಂಚಿತವಾಗಿ ಹಾಲ್ಟಿಕೆಟ್ ನೀಡಲಾಗಿತ್ತು. ಆದರೆ ಈ ಹಾಲ್ಟಿಕೆಟ್ ಇಟ್ಟಲ್ಲಿಯೇ ಸುಟ್ಟು ಭಸ್ಮವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.