ಜೂನ್ 9 ಕೇರಳಕ್ಕೆ ಮುಂಗಾರು ಪ್ರವೇಶ, ಚಂಡಮಾರುತ ಬಿಪರಾಜಾಯ್ ಭೀತಿ: ಹವಾಮಾನ ಇಲಾಖೆ | Azad Times

3 months ago 2
Google News-KN Google News-EN Telegram Facebook

Azad Times News Desk.

 ಹವಾಮಾನ ಇಲಾಖೆ

ಜೂನ್ 9ರಂದು ಕೇರಳವನ್ನು ಮುಂಗಾರು ಪ್ರವೇಶಿಸಲಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗುತ್ತಿರುವ ಚಂಡಮಾರುತ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಸೃಷ್ಟಿಯಾಗಲಿದ್ದು, ಬಾಂಗ್ಲಾದೇಶದಲ್ಲಿ ಈ ಚಂಡಮಾರುತಕ್ಕೆ ಬಿಪರಾಜಾಯ್ ಎಂಬ ಹೆಸರಿಡಲಾಗಿದೆ.

ಚಂಡಮಾರುತ ತಡವಾಗಿ ಆಗಮಿಸಬೇಕಿದ್ದ ಮುಂಗಾರು ಕೇರಳವನ್ನು ಶೀಘ್ರದಲ್ಲೇ ಪ್ರವೇಶಿಸಲಿದ್ದು, ಇದು ಉತ್ತರ ಭಾರತದ ಕರಾವಳಿ ತೀವ್ರಕ್ಕೆ ಹೆಚ್ಚು ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದ ಪೂರ್ವ-ದಕ್ಷಿಣ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಆರಂಭದಲ್ಲಿ ಇದು 920 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಮುಂದಿನ 24 ಗಂಟೆ ನಿರ್ಣಾಯಕವಾಗಿದ್ದು, ಈ ಚಂಡಮಾರುತ ಯಾವ ಕಡೆ ತಿರುಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ಈ ಬಾರಿ ಮುಂಗಾರು ಜೂನ್ 4ರಂದು ಕೇರಳ ಕರಾವಳಿಯನ್ನು ಪ್ರವೇಶಿಸಬೇಕಿತ್ತು. ಆದರೆ ಹಿಂಗಾರು ಅಬ್ಬರದಿಂದ ಜೂನ್ 8 ಅಥವಾ 9ರಂದು ಕೇರಳ ಗಡಿ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page