ಪತ್ನಿ ಶವ ಹೊತ್ತು ಸಾಗುತ್ತಿದ್ದ ಗಂಡನಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸ್ ಇನ್ ಸ್ಪೆಕ್ಟರ್! | Azad Times

3 months ago 10
Google News-KN Google News-EN Telegram Facebook

Azad Times News Desk.

ಹಣ ಇಲ್ಲ ಎಂಬ ಕಾರಣಕ್ಕೆ ಆಟೋ ಮತ್ತು ಆಂಬುಲೆನ್ಸ್ ಬರಲು ನಿರಾಕರಿಸಿದ್ದರಿಂದ ಪತ್ನಿ ಶವವನ್ನು ಹೊತ್ತು ಪತಿ ಕಿಲೋಮೀಟರ್ ಗಟ್ಟಲೆ ನಡೆದು ಹೋಗುತ್ತಿದ್ದಾಗ ಪೊಲೀಸ್ ಇನ್ ಸ್ಪೆಕ್ಟರ್ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂದಿರುಗುವಾಗ ಆಟೋದಲ್ಲಿ ಪತ್ನಿ ಮೃತಪಟ್ಟಿದ್ದಾರೆ. ತಮ್ಮ ಬಳಿ ಇದ್ದ 2000 ರೂ. ನೀಡಿದ್ದರಿಂದ ಆತ ಮುಂದೆ ಕರೆದೊಯ್ಯಲು ನಿರಾಕರಿಸಿದ್ದಾನೆ. ಇದರಿಂದ ಪತ್ನಿ ಶವವನ್ನು ಹೊತ್ತು ಊರಿಗೆ ನಡೆದುಕೊಂಡೆ ಹೋಗಿದ್ದಾರೆ.

ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸದಲ್ಲಿರುವ ತನ್ನ ಅಸ್ವಸ್ಥ ಪತ್ನಿಯನ್ನು ಪಾಂಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರಿಂದ ಸುಮಾರು 100 ಕಿ.ಮೀ ದೂರದ ತಮ್ಮ ಮನೆಗೆ ಆಟೋದಲ್ಲಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು.

ಪಾಂಗಿ ತಮ್ಮ ಹಳ್ಳಿಗೆ ಮರಳಲು ಆಟೋ ರಿಕ್ಷಾವನ್ನು 2000 ರೂ.ಗೆ ಬಾಡಿಗೆಗೆ ಪಡೆದರು, ಆದರೆ ಪತ್ನಿ ವಿಜಯನಗರದ ಬಳಿ ದಾರಿ ಮಧ್ಯದಲ್ಲಿ ನಿಧನರಾದರು. ನಂತರ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಚೆಲ್ಲೂರು ರಿಂಗ್ ರೋಡ್​ನಲ್ಲಿ ಅವರನ್ನು ಇಳಿಸಿದ್ದಾನೆ.

ಬೇರೆ ದಾರಿ ಕಾಣದೆ ಪಾಂಗಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿಲೋಮೀಟರ್ ದೂರದಲ್ಲಿದ್ದ ಮನೆಯ ಕಡೆಗೆ ನಡೆದಿದ್ದಾರೆ.

ವ್ಯಕ್ತಿಯೊಬ್ಬ ಪತ್ನಿಯನ್ನು ಹೊತ್ತು ನಡೆದುಕೊಂಡು ಹೋಗುತ್ತಿರುವ ಮಾಹಿತಿ ಪಡೆದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಆದರೆ ಒಡಿಶಾ ಭಾಷೆ ಅರ್ಥವಾಗದೇ ಗೊಂದಲಕ್ಕೀಡಾಗಿದ್ದಾರೆ. ನಂತರ ಮತ್ತೊಬ್ಬ ವ್ಯಕ್ತಿಯ ಸಾಹಯದಿಂದ ವಿಷಯ ತಿಳಿದುಕೊಂಡಿದ್ದಾರೆ.

ವಿಶಾಖಪಟ್ಟಣದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಕಿರಣ್ ಕುಮಾರ್ ನಾಯ್ಡು 10,000 ರೂ. ಸಂಗ್ರಹಿಸಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ.

2016ರಲ್ಲಿ ಒಡಿಶಾದ ಭವಾನಿಪಟ್ನಾದಲ್ಲಿ ಆಸ್ಪತ್ರೆಯೊಂದು ಶವಸಂಸ್ಕಾರವನ್ನು ನಿರಾಕರಿಸಿದ ಬಳಿಕ ಮತ್ತೊಬ್ಬ ವ್ಯಕ್ತಿ ದಾನಾ ಮಾಂಝಿ ತನ್ನ ಪತ್ನಿಯ ಶವವನ್ನು ಸುಮಾರು 12 ಕಿ.ಮೀ ವರೆಗೆ ತನ್ನ ಭುಜದ ಮೇಲೆ ಹೊತ್ತು ನಡೆದಿದ್ದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page