ಸಿದ್ದು ಸವದಿಗೆ ಟಿಕೆಟ್ ಘೋಷಿಸಿ ಉಲ್ಟಾ ಹೊಡೆದ ಬಿಎಸ್ ಯಡಿಯೂರಪ್ಪ! | Azad Times

2 months ago 3
Google News-KN Google News-EN Telegram Facebook

Azad Times News Desk.

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಚುನಾವಣಾ ಕಣ ರಂಗೇರುತ್ತಿದೆ.

ಹೇಗಾದರೂ ಮಾಡಿ ಗೆದ್ದು ರಾಜಕೀಯ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳು ತಯಾರಿ ನಡೆಸಿವೆ. ಇದರ ಬೆನ್ನಲ್ಲೇ ಇದೀಗ ಉಭಯ ಪಕ್ಷಗಳ ನಾಯಕರ ನಡೆಗಳು ಕುತೂಹಲ ಕೆರಳಿಸಿದೆ.

ಧಾರವಾಡ ಕುಂದಗೋಳ ಕಾಂಗ್ರೆಸ್​ ಶಾಸಕಿ ಕುಸುಮಾ ಶಿವಳ್ಳಿ ಇಂದು ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಭೇಟಿ ಮಾಡಿದ್ದಾರೆ.

ಹೌದು ಇಂದು ಕುಂದಗೋಳದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದಾದ ಬೆನ್ನಲ್ಲೇ ಇದೀಗ ಕೈ ಶಾಸಕಿ ಸಿಎಂ ಭೇಟಿ ಮಾಡಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಜಿಲ್ಲೆಯ ಕುಂದಗೋಳದಲ್ಲಿ ಇಂದು ನಡೆಯಬೇಕಿದ್ದ ಪ್ರಜಾಧ್ವನಿ ಸಮಾವೇಶ, ಕುಂದಗೋಳ ಕಾಂಗ್ರೆಸ್‌ ಘಟಕದಲ್ಲಿ ಆದ ಭಿನ್ನಮತ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಕುಸುಮಾಗೆ ಟಿಕೆಟ್​​ ಕೊಡದಂತೆ ಪಟ್ಟು ಹಿಡಿದಿರುವ ಟಿಕೆಟ್​ ಆಕಾಂಕ್ಷಿಗಳು, ಕುಸುಮಾ ಅವರನ್ನ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಈ ಕಾರಣದಿಂದಲೇ ಇಂದು ನಡೆಯಬೇಕಿದ್ದ ಸಮಾವೇಶ ರದ್ದಾಗಿದೆ. ಇನ್ನು ಇದೇ ವೇಳೆ ಕೈ ಶಾಸಕಿ ಕುಸುಮಾವತಿ ಸಿಎಂ ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ. ಇದರಿಂದ ಇಂದು ಕಲಘಟಗಿಯಲ್ಲಿ ಮಾತ್ರ ಕಾಂಗ್ರೆಸ್​​ನ ಪ್ರಜಾಧ್ವನಿ ಸಮಾವೇಶ ನಡೆಯಲಿದೆ..

ಈ ಕುರಿತು ಮಾತನಾಡಿರುವ ಕುಸುಮಾ ನಾನೇ ಕ್ಯಾಂಡಿಡೇಟ್, ಯಾರು ಏನೇ ಮಾಡಿದ್ರು ಟಿಕೆಟ್ ತಪ್ಪಿಸಲು ಆಗೋದಿಲ್ಲ ಎಂದು ಹೇಳಿದ್ದಾರೆ.. ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಕುಸುಮ ಸಮರ್ಥಿಸಿಕೊಂಡಿದ್ದಾರೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page