ಗೆಳೆತನ ಬೆಳೆಸಲ್ಲ ಅಂದ ಮಹಿಳೆ ಕೊಂದು ಬಿಸಾಡಿದ್ದ ಕ್ಯಾಬ್ ಚಾಲಕ ಅರೆಸ್ಟ್! | Azad Times

3 months ago 6
Google News-KN Google News-EN Telegram Facebook

Azad Times News Desk.

ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ನಗರದ ಹೊರ ವಲಯದಲ್ಲಿ ಎಸೆದು ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಭಿಮರಾವ್ ಬಂಧಿತ ಅರೋಪಿ. ದೀಪಾ ಕೊಲೆಯಾದ ಮಹಿಳೆ. ಹೊಸಕೋಟೆಯ ಖಾಸಗಿ ಕಂಪನಿಯೊಂದರಲ್ಲಿ ದೀಪಾ ಕೆಲಸ ಮಾಡುತ್ತಿದ್ದರು.

ಅದೇ ಕಂಪನಿಯಲ್ಲಿ ಆರೋಪಿ ಭಿಮರಾವ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಭಿಮರಾವ್ ಪ್ರತಿ ದಿನ ದೀಪಾಳನ್ನು ಇಂದಿರಾನಗರದಿಂದ ಪಿಕಮ್-ಡ್ರಾಪ್ ಮಾಡುತ್ತಿದ್ದ.

ದೀಪಾ ಕಂಡರೆ ಭಿಮರಾವ್​ಗೆ ಒಂದು ರೀತಿಯ ಹುಚ್ಚು ಮೋಹ. ಹೀಗಾಗಿ ಮಹಿಳೆ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ. ತನ್ನ ಜೊತೆಗೆ ಗೆಳತಿಯಂತೆ ಇರು ಎಂದು ಪೀಡಿಸುತ್ತಿದ್ದ. ಆದರೆ ದೀಪಾಗೆ ಇದು ಇಷ್ಟವಾಗುತ್ತಿರಲಿಲ್ಲ. ಆಕೆ ಆತನ ಜೊತೆ ಎಷ್ಟು ಅಂದರ ಅಷ್ಟರಂತೆ ಇದ್ದರು.

ಫೆಬ್ರವರಿ 27 ರಂದು ಇಂದಿರಾನಗರದಲ್ಲಿ ದೀಪಾರನ್ನು ಪಿಕ್ ಅಪ್ ಮಾಡುವಾಗ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಆರೋಪಿ ಕಬ್ಬಿಣದ ಜಾಕ್ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ನಂತರ ಕಾರಿನಲ್ಲಿ ಮೃತ ದೇಹ ಸಾಗಿಸಿ ಬೆಂಗಳೂರು ಹೊರ ವಲಯದ ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದಾನೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page