Google News-KN | Google News-EN | Telegram |
ಬಿಜೆಪಿ ಮುಖಂಡನನ್ನು ತಮ್ಮದೇ ಮನೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ಒಬ್ಬನನ್ನು ಬಂಧಿಸಿದ ಘಟನೆ ಮಣಿಪುರದ ಥೌಬಾಲ್ ನಲ್ಲಿ ನಡೆದಿದೆ.
ಬಿಜೆಪಿಯ ರಾಜ್ಯ ಘಟಕದ ಮಾಜಿ ಯೋಧರ ಘಟಕದ ಕಾನ್ವೆನಿಯರ್ ಆಗಿದ್ದ 50 ವರ್ಷದ ಲೈಶ್ರಮ್ ರಾಮೇಶ್ವರ್ ಸಿಂಗ್ ಕ್ಷೇತ್ರಿ ಬಡಾವಣೆಯಲ್ಲಿನ ತಮ್ಮ ನಿವಾಸದ ಗೇಟ್ ಬಳಿ ಹತ್ಯೆ ಆಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅತ್ಯಂತ ಸಮೀಪದಿಂದ ಲೈಶ್ರಮ್ ರಾಮೇಶ್ವರ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮೇಶ್ವರ್ ಸಿಂಗ್ ಅವರ ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆದ ಬೆನ್ನಲ್ಲೇ ವಾಹನವೊಂದರಲ್ಲಿ ಹೋಗುತ್ತಿದ್ದ ಅನುಮಾನಸ್ಪದ ವ್ಯಕ್ತಿಯನ್ನು ಪೊಲೀಸರು ಬಂಧಿಸಲಾಗಿದೆ. ನೌರೆಮ್ ರಿಕ್ಕಿ ಪಾಯಿಂಟಿಂಗ್ ಸಿಂಗ್ ಬಂಧಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.