Google News-KN | Google News-EN | Telegram |
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತಕ್ಕೆ ಸ್ವದೇಶಿ ಅಪಘಾತ ನಿರೋಧಕ ತಂತ್ರಜ್ಞಾನ `ಕವಚ್’ ಕೊರಮಂಡಲ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಅಳವಡಿಸದೇ ಇರುವುದು ಕಾರಣ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ರೈಲು ದುರಂತಗಳು ಸಂಭವಿಸುವುದು ಚಾಲಕರ ನಿರ್ಲಕ್ಷ್ಯ, ಹಳಿಗಳಲ್ಲಿನ ದೋಷ ಅಥವಾ ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಹಳಿಗಳನ್ನು ಹಾಳುಗೆಡವುದರಿಂದ. ಆದರೆ ಈ ಮೂರು ರೈಲುಗಳ ದುರಂತಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಾರದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ರೈಲುಗಳ ಡಿಕ್ಕಿಯಿಂದ ಸುಮಾರು 261 ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದ ಭೀಕರತೆ ಎಷ್ಟಿದೆಯೆಂದರೆ ಬೋಗಿಗಳು ಉಲ್ವಾ ಬಿದ್ದು ಮುರಿದುಬಿದ್ದಿವೆ.
ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಘಟನೆಗೆ ಕಾರಣ ಹುಡುಕುತ್ತಿದ್ದೇವೆ. ಆದರೆ ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆ ಇಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದು ಭಾರತೀಯ ರೈಲ್ವೆ ವಕ್ತಾರ ಅಮಿತಾಭ್ ಶರ್ಮ ತಿಳಿಸಿದ್ದಾರೆ.
ಕವಚ್ ವ್ಯವಸ್ಥೆ ಚಾಲಕರಿಗೆ ಅಪಾಯದ ಮುನ್ಸೂಚನೆ ನೀಡುವುದು ಮಾತ್ರವಲ್ಲ, ವೇಗ ನಿಯಂತ್ರಣ ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಇದರಿಂದ ರೈಲ್ವೆ ಅಪಘಾತಗಳನ್ನು ತಡೆಯಬಹುದಾಗಿದೆ.
ಅಪಘಾತ ಹಿನ್ನೆಲೆ ಹಲವಾರು ಜನರು ತಂತ್ರಜ್ಞಾನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸ್ವದೇಶಿ ಘರ್ಷಣೆ ನಿರೋಧಕ ತಂತ್ರಜ್ಞಾನವಾದ ಕವಾಚ್ ಅಪಘಾತ ಸಂಭವಿಸುವುದನ್ನು ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕವಾಚ್ ಎಂಬುದು ರೈಲು ಅಪಘಾತಗಳನ್ನು ತಡೆಗಟ್ಟಲು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವಿರೋಧಿ ಘರ್ಷಣೆ ತಂತ್ರಜ್ಞಾನವಾಗಿದೆ. ಇದು ರೈಲುಗಳು ಬರುವುದರ ಮಾಹಿತಿಯನ್ನು ರವಾನಿಸುತ್ತದೆ.
ಅಪಘಾತವಾಗುತ್ತೆ ಎನ್ನುವ ಸಂದರ್ಭದಲ್ಲಿ ರೈಲು ಚಾಲಕರಿಗೆ ಸಂದೇಶ ರವಾನಿಸುವ ಕೆಲಸ ಮಾಡುತ್ತೆ. ಆದರೆ ನಿನ್ನೆ ನಡೆದ ಅಪಘಾತದಲ್ಲಿ ಕವಾಚ್ ಯಾಕೆ ಕೆಲಸ ಮಾಡಿಲ್ಲ ಎಂದು ಹಲವು ಪ್ರಶ್ನೆ ಮಾಡ್ತಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.