ಕರ್ನಾಟಕದ ರಣಜಿ ಫೈನಲ್ ಕನಸು ಭಗ್ನ: ಸೌರಾಷ್ಟ್ರ ಫೈನಲ್ ಗೆ! | Azad Times

3 months ago 7
Google News-KN Google News-EN Telegram Facebook

Azad Times News Desk.

ಜಿದ್ದಾಜಿದ್ದಿನ ಪಂದ್ಯದಲ್ಲಿ ಕರ್ನಾಟಕ ತಂಡ 4 ವಿಕೆಟ್ ಗಳಿಂದ ಸೌರಾಷ್ಟ್ರ ವಿರುದ್ಧ ವೀರೋಚಿತ ಸೋಲು ಕಾಣುವ ಮೂಲಕ ರಣಜಿ ಟ್ರೋಫಿ ಫೈನಲ್ ಕನಸು ಭಗ್ನಗೊಂಡಿದೆ.

ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಎರಡನೇ ಇನಿಂಗ್ಸ್ ನಲ್ಲಿ 234 ರನ್ ಸಂಪಾದಿಸಿತು. ಮೊದಲ ಇನಿಂಗ್ಸ್ ನಲ್ಲಿ 120 ರನ್ ಗಳ ಮುನ್ನಡೆ ಪಡೆದಿದ್ದ ಸೌರಾಷ್ಟ್ರ ತಂಡ ಗೆಲ್ಲಲು 115 ರನ್ ಗುರಿಯನ್ನು ಸೌರಾಷ್ಟ್ರ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಸುಲಭ ಗುರಿ ಇದ್ದರೂ ಸೌರಾಷ್ಟ್ರ ತಂಡ ಒಂದು ಹಂತದಲ್ಲಿ 42 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಅರ್ಪಿತ್ ವಸವದಾ 51 ಎಸೆತಗಳಲ್ಲಿ 7 ಬೌಂಡರಿ ಸೇರಿದ 47 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಕರ್ನಾಟಕದ ಪರ ಕೆ.ಗೌತಮ್ ಮತ್ತು ವಾಸುಕಿ ಕೌಶಿಕ್ ತಲಾ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ನಿಕಿನ್ ಜೋಸ್ 161 ಎಸೆತಗಳಲ್ಲಿ 9 ಬೌಂಡರಿ ಸೇರಿದ 119 ರನ್ ಗಳಿಸಿ ತಂಡವನ್ನು ಆಧರಿಸಿದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page