ಸಮಯಪ್ರಜ್ಞೆ ತೋರಿ ಹಾವಿನಿಂದ ಕಚ್ಚಿಸಿಕೊಂಡಿದ್ದ ಅಮ್ಮನನ್ನು ರಕ್ಷಿಸಿದ ಮಗಳು! | Azad Times

2 months ago 1
Google News-KN Google News-EN Telegram Facebook

Azad Times News Desk.

ಸಮಯಪ್ರಜ್ಞೆ ತೋರಿದ ಮಗಳು ಹಾವು ಕಚ್ಚಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ತಾಯಿಯನ್ನು ರಕ್ಷಿಸಿಕೊಂಡ ಕುತೂಹಲಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ.

ಕೆಯ್ಯೂರು ಗ್ರಾಮಪಂಚಾಯತ್ ಸದಸ್ಯೆ ಮಮತಾ ರೈ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮಾವಿನ ತೋಟಕ್ಕೆ ನೀರು ಬಿಡಲೆಂದು ಪಂಪ್ಸೆಟ್ಗೆ ಸ್ವಿಚ್ ಹಾಕಲು ತೆರಳಿದ್ದರು. ವೇಳೆ ಅವರ ಕಾಲಿಗೆ ವಿಷಯುಕ್ತ ಹಾವೊಂದು ಕಚ್ಚಿದೆ. ಪರಿಣಾಮ ಕಾಲಿನಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರು ಮನೆಗೆ ಬಂದು ವಿಚಾರ ತಿಳಿಸಿದ್ದಾರೆ.

ಮನೆಯಲ್ಲಿದ್ದ ಕೆಲಸದವರು ಮಮತಾ ಅವರ ಕಾಲಿಗೆ ಬೈಹುಲ್ಲಿನಿಂದ ಕಟ್ಟಿದ್ದಾರೆ. ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಗಳು ಶ್ರಾವ್ಯಾ (Shravya), ಹಾವು ಕಚ್ಚಿದ ಭಾಗದಿಂದ ಬಾಯಿ ಮೂಲಕ ರಕ್ತ ಹೀರಿದ್ದಾರೆ. ಇದಾದ ಬಳಿಕ ಮಮತಾರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ.

ಮತಾಗೆ ಚಿಕಿತ್ಸೆ ನೀಡಿದ ವೈದ್ಯರು, ಶ್ರಾವ್ಯಾಳ ಕಾರ್ಯಕ್ಕೆ ಮಚ್ಚುಗೆ ಸೂಚಿಸಿದ್ದಾರೆ. ಕೂಡಲೇ ರಕ್ತ ಹೀರಿದ್ದರಿಂದ ಮಮತಾ ಭಾರೀ ಅಪಾಯದಿಂದ ಪಾರಾಗಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ಶ್ರಾವ್ಯಾ ಅವರು ಪುತ್ತೂರು ವಿವೇಕಾನಂದ ಕಾಲೇಜಿ (Vivekananda Collage) ನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಶ್ರಾವ್ಯಾ ದಿಟ್ಟತನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page