Google News-KN | Google News-EN | Telegram |
ತನಗಿಂತ 10 ವರ್ಷ ದೊಡ್ಡವಳಾದ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ರೆಫ್ರಿಜರೇಟರ್ ನಲ್ಲಿ ಕೆಲವು ದಿನಗಳ ಕಾಲ ಬಚ್ಚಿಟ್ಟ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ದೆಹಲಿಯಲ್ಲಿ ಕೆಲವು ತಿಂಗಳ ಹಿಂದೆ ನಡೆದ ಘಟನೆ ಮಾದರಿಯಲ್ಲಿ ನಡೆದ ಈ ಭಯಾನಕ ಘಟನೆಯಿಂದ ಹೈದರಾಬಾದ್ ಬೆಚ್ಚಿಬಿದ್ದಿದೆ.
48 ವರ್ಷದ ಚಂದ್ರ ಮೋಹನ್ ಎಂಬಾತ ದಿಲ್ ಖುಷ್ ನಗರದ 55 ವರ್ಷದ ಮಹಿಳೆ ಯೆರ್ರಮ್ ಅನುರಾಧಾ ರೆಡ್ಡಿ ಹಣಕಾಸಿನ ವಿಷಯದಲ್ಲಿ ಹತ್ಯೆಗೈದಿದ್ದಾನೆ.
ಸ್ಯಾನಿಟೆಷನ್ ಕಾರ್ಮಿಕರು ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಪತ್ತೆಯಾದ ಬ್ಯಾಗ್ ನಲ್ಲಿ ಮಹಿಳೆಯ ರುಂಡ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಚಂದ್ರ ಮೋಹನ್ ಅವರನ್ನು ಬಂಧಿಸಿದ್ದಾರೆ.
ಮೋಹನ್ ಅವರ ಕಟ್ಟಡದ ನೆಲ ಮಹಡಿಯಲ್ಲಿ ವಾಸವಾಗಿದ್ದ ಯೆರ್ರಮ್ ಅನುರಾಧಾ ರೆಡ್ಡಿ ಮತ್ತು ಚಂದ್ರ ಮೋಹನ್ ನಡುವೆ 15 ವರ್ಷಗಳಿಂದ ಸಂಬಂಧ ಇತ್ತು. ಪತಿ ಹಲವು ವರ್ಷಗಳ ಹಿಂದೆ ನಿಧನರಾದ ನಂತರ ಅನುರಾಧ ಮತ್ತು ಮೋಹನ್ ಆತ್ಮೀಯರಾಗಿದ್ದರು ಎನ್ನಲಾಗಿದೆ.
ಅನುರಾಧ ಬಡ್ಡಿ ವ್ಯವಹಾರ ನೀಡುತ್ತಿದ್ದು, ಕಷ್ಟದಲ್ಲಿದ್ದವರಿಗೆ ನೀಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು. ಮೋಹನ್ ಅನುರಾಧ ಬಳಿ 7 ಲಕ್ಷ ರೂ. ಸಾಲ ಪಡೆದಿದ್ದೂ ಅದನ್ನು ಹಿಂತಿರುಗಿಸಿರಲಿಲ್ಲ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇ 12ರಂದು ಅನುರಾಧ ಅವರನ್ನು ಚಾಕುವಿನಿಂದ ಎದೆ, ಹೊಟ್ಟೆ ಮುಂತಾದ ಕಡೆ ಪದೇಪದೆ ಇರಿದು ಮೋಹನ್ ಹತ್ಯೆಗೈದಿದ್ದಾನೆ. ನಂತರ ಕಲ್ಲು ಕೊರೆಯುವ ಯಂತ್ರವನ್ನು ತಂದು ಮನೆಯಲ್ಲಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸಿದ್ದಾನೆ.
ದೇಹದ ತುಂಡುಗಳನ್ನು ನಗರದ ವಿವಿಧೆಡೆ ಕಸದ ಬಿಸಾಡುವ ಪ್ರದೇಶಗಳಲ್ಲಿ ಬಿಸಾಡಿದ್ದಾನೆ. ನಂತರ ಸಾಕಷ್ಟು ಸುಗಂಧ ದ್ರವ್ಯ ಬಳಸಿ ಶವದ ವಾಸನೆ ಹೊರಗೆ ಬಾರದಂತೆ ನೋಡಿಕೊಂಡಿದ್ದಾನೆ. ಅಲ್ಲದೇ ಅನುರಾಧ ಮೊಬೈಲ್ ನಿಂದ ಸ್ನೇಹಿತರಿಗೆ ಮೆಸೇಜ್ ಕಳುಹಿಸಿ ಆಕೆ ಬದುಕಿರುವಂತೆ ತೋರಿಸಿಕೊಂಡಿದ್ದಾನೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.