ಬೆಂಗಳೂರಿನಲ್ಲಿ ಮನೆ ಕೆಲಸದವರನ್ನು ನೇಮಕಕ್ಕೆ ಮಾರ್ಗಸೂಚಿ ಬಿಡುಗಡೆ | Azad Times

2 months ago 3
Google News-KN Google News-EN Telegram Facebook

Azad Times News Desk.

ಮನೆಗೆಲಸದ ಹೊರೆ ತಗ್ಗಿಸಿಕೊಳ್ಳಲು ಕೆಲಸಗಾರರನ್ನು ನೇಮಿಸಿಕೊಳ್ತಾರೆ… ಹೀಗೆ ಮನೆಗೆಲಸಕ್ಕೆ ಸೇರಿಸಿಕೊಳ್ಳುವಾಗ ಹುಷಾರಾಗಿರಬೇಕಾಗುತ್ತದೆ.

ಹಲವು ಮನೆಗಳ್ಳತನ ಪ್ರಕರಣದಲ್ಲಿ ಮನೆಗೆಲಸದವರ ಕೈವಾಡವೇ ಹೆಚ್ಚಾಗಿರುತ್ತದೆ.. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮನೆ ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರಾಗಿರಬೇಕು.

ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮನೆ ಕೆಲಸದವರ ಬಗ್ಗೆ ಹೊಸ ಗೈಡ್​ಲೈನ್ಸ್​​ ಬಿಡುಗಡೆಯಾಗಿದೆ.. ಮನೆ ಮನೆಗೆ ತೆರಳಿ ಪೊಲೀಸರು ಕೆಲಸಗಾರರ ಮಾಹಿತಿ ಕಲೆ ಹಾಕುತ್ತಿದ್ದು, ಕೆಲಸಗಾರರ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಿಕೊಳ್ತಿದ್ದಾರೆ.

ಕೆಲಸಗಾರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುಂಚೆ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಮನೆ ಮಾಲೀಕರಿಗೆ ತಿಳಿಸುತ್ತಿದ್ದಾರೆ.. ಇನ್ನು ಹೊಸ ಗೈಡ್​ಲೈನ್ಸ್​ನಲ್ಲಿರುವ ಅಂಶಗಳೆಂದರೆ, ಕೆಲಸಕ್ಕೆ ಸೇರಿಸಿಕೊಳ್ಳುವವರ ಮಾಹಿತಿ ಖಾಕಿಗೆ ನೀಡಬೇಕು, ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಬೇಕು, ಪೊಲೀಸರಿಂದ ಆ ವ್ಯಕ್ತಿಯ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು.

ಮನೆ ಕೆಲಸಕ್ಕೆ ಬರುವವರ ಪೂರ್ವಾಪರ ವಿಚಾರಣೆ ಮಾಡಬೇಕು.. ಅವರ ಮೇಲೆ ಅಪರಾಧ ಪ್ರಕರಣಗಳು ಇವೆಯಾ ಎಂದು ಪರಿಶೀಲನೆ ನಡೆಸಿದ ಬಳಿಕ ಕೆಲಸಕ್ಕೆ ನೇಮಿಸಿಕೊಳ್ಳಬೇಕಾಗಿರುತ್ತದೆ.. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ, ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page