Google News-KN | Google News-EN | Telegram |
ಮಕ್ಕಳು ಮಹಡಿಯ ಬಾಲ್ಕನಿಯಿಂದ ಸಾವನಪ್ಪುತ್ತಿರುವ ಪ್ರಕರಣ ಹೆಚ್ಚಾಗಿ ವರದಿಯಾಗ್ತಿದೆ.
ಕಳೆದ 4 ದಿನಗಳ ಹಿಂದೆ ಕೆಂಗೇರಿಯಲ್ಲಿ ಮಗು ಬಾಲ್ಕನಿಯಿಂದ ಬಿದ್ದು ಸಾವನಪ್ಪಿದ ಪ್ರಕರಣ ಮಾಸುವ ಮುನ್ನವೇ ಚಾಮರಾಜಪೇಟೆಯಲ್ಲಿ ಅಂಥಹದ್ದೇ ಘಟನೆ ನಡೆದಿದೆ.
ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್ನಲ್ಲಿ ಒಂದೂವರೆ ವರ್ಷದ ದೀಕ್ಷಾ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ವಿನಯ್ ದಂಪತಿಯ ಪುತ್ರಿ ದೀಕ್ಷಾ ಸಾವನಪ್ಪಿದ್ದು, ಪೋಷಕರಲ್ಲಿ ದುಖಃ ಮಡುಗಟ್ಟಿದೆ.. ಸ್ನೇಹಿತರ ಮನೆಗೆ ದಂಪತಿಗಳು ಮಗಳನ್ನು ಕರೆದುಕೊಂಡು ಬಂದಿದ್ರು..ದೀಕ್ಷಾಳ ತಾಯಿ 9.30ರ ಸುಮಾರಿಗೆ ಮಗುವಿಗೆ ಊಟ ಮಾಡಿಸಲು ಮುಂದಾಗಿದ್ದಾರೆ.
ಆ ವೇಳೆ ಆಟವಾಡುತ್ತ ಮಗು ಗ್ರಿಲ್ಸ್ ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಮಗು ಕೆಳಗೆ ಬಿದ್ದಿದೆ.. ಪೋಷಕರು ಕೂಡಲೇ ಮಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ,
ಆದರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ.. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.